ಮತ್ತೇ ನೆನಪಾಗದಿರು
ನೆನಪೇ ನೆನಪಾಗದಿರು ಮತ್ತೆ
ಬಂದರೆ ಹಿಂಬಾಲಿಸಿ
ಬಿಡದೆ ಬೆನ್ನಟ್ಟಿ ದಾರಿ
ನೆನಪಿರದ ಕಾಡಿಗೆ ಬಿಟ್ಟು ಬರುವೆ...
ಒಹ್ ನೆನಪೇ ನೆನಪಾಗದಿರು ಮತ್ತೆ
ಕಲ್ಲು ಕಟ್ಟಿ ಮತ್ತೆಂದೂ
ಮೇಲೆದ್ದು ಮರಳುವ ದಾರಿಗೆ
ಬೆಳಕಿಲ್ಲದ ಬಾವಿಗೆ ನೂಕಿ ಬಿಡುವೆ
ನೆನಪೇ ನೆನಪಾಗದಿರು ಮತ್ತೆ ಮತ್ತೆ
ಕೈಯಲಿರುವ ನೆನಪ ಕಸಿದು
ಹರಿದು ಸುಟ್ಟು ಬೂದಿ
ಹೊರ ಹಾರದಂತೆ ಹೂತಿಡುವೆ
ನಿನ್ನನೇನು ಮಾಡಿದೆನೆಂಬ ಸತ್ಯದ
ಉಸಿರ ಹಿಸುಕಿ ಕಣ್ಣು ಮುಚ್ಚಿ ಹೂತು
ಮರಳಿ ನೆನಪಾಗದಂತೆ ಮರೆತುಬಿಡುವೆ
ಒಹ್ ನೆನಪೇ ! ಮರಳಿ ನೆನಪಾಗದಿರು ಮತ್ತೆ ಅರಳಿ...
--
ಪ್ರೀತಿಯಿಂದ ,
ಪ್ರಿತಿಗಾಗಿ.......,
ಪ್ರಿತಿಗೊಸ್ಕರ...........
ಪ್ರೀತಿಯನ್ನು ...............
ಪ್ರೀತಿಸುತ್ತಾ ...................
ಹೋದಂತೆಲ್ಲಾ ಬಿರುಗಾಳಿಗೆ ಸಿಕ್ಕ ಎಲೆಯಂತಾಗಿದ್ದೇನೆ .....
ಕನ್ನಡಿಗ ವಿಜಯ್( ಕವಿ) ಹೆಮ್ಮರಗಾಲ
Friday, April 11, 2014
Wednesday, April 2, 2014
Subscribe to:
Posts (Atom)
ಕೌಂಡಿನ್ಯ ಮಹಾಕ್ಷೇತ್ರ ಸಂತಾನ ವೇಣುಗೋಪಾಲ ಸ್ವಾಮಿ ದೇವಸ್ಥಾನ ಹೆಮ್ಮರಗಾಲ.
ಕೌಂಡಿನ್ಯ ಮಹಾಕ್ಷೇತ್ರ ಸಂತಾನ ವೇಣುಗೋಪಾಲ ಸ್ವಾಮಿ ದೇವಸ್ಥಾನ ಹೆಮ್ಮರಗಾಲ. ನಂಜನಗೂಡಿನಿಂದ 14.ಕಿ.ಮೀ. ದೂರದಲ್ಲಿರುವ ಹೆಮ್ಮರಗಾಲ ಗ್ರಾಮ `ಕೌಂಡಿನ್ಯ ಮಹಾಕ್ಷೇತ್ರ`...
-
History of Hemmaragala 1,800-year-Old Temple a Boon for Childless Couples The Place Of Miracle Hemmaragala is a Village of ...
-
ಅ.ನ.ಕೃ ಅವರ ಕಾದಂಬರಿ ಸಂಧ್ಯಾರಾಗ ಕುರಿತು ಆದರದ ಕನ್ನಡಿಗರಲ್ಲಿ ಅ.ನ.ಕೃಷ್ಣರಾಯರದು ಅಪೂರ್ವ ವ್ಯಕ್ತಿತ್ವ, ಅಪೂರ್ವ ಪಾತ್ರ. ಅವರ ರೂಪ ಆಕರ್ಷಕ. ಖಾಸಗೀ ಸಂಭಾಷಣೆಯಲ್ಲಿ...
-
ಅಮ್ಮಂದಿರ ದಿನ ನಾಳೆ ಭಾನುವಾರ ಅಮ್ಮಂದಿರ ದಿನ. ಹೌದು ಅಮ್ಮನಿಗೆ ನಮ್ಮೆಲ್ಲರ ಜೀವನದಲ್ಲಿ ಒಂದು ವಿಶೇಷ ಸ್ಥಾನ. ಒಂದು ಸಣ್ಣ ನೋವಾದರೂ ನಾವು ಅಮ್ಮ ಎಂದೇ ಕೂಗ...